‘ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್, ವಾಟರ್ಮನ್ ಸೇರಿದಂತೆ 20ಕ್ಕೂ ಹೆಚ್ಚು ನಿಯಮಾನುಸಾರ ಅನುಮೋದಿತ ಸಿಬ್ಬಂದಿಗೆ ಸಲ್ಲದ ಕಾರಣಗಳ ನೆಪದಿಂದ 29 ತಿಂಗಳುಗಳಿಂದ ವೇತನ ನೀಡದೇ ಜೀವನದ ಕನಿಷ್ಠ ನಿರ್ವಹಣೆಗೂ ಸಾಧ್ಯವಾಗದೇ ನಮ್ಮ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳ ವಿದ್ಯಾಭ್ಯಾಸದ ಜೊತೆ ಆರೋಗ್ಯದ ಸಮಸ್ಯೆ ಎದುರಿಸಲು ಕಷ್ಟವಾಗಿದೆ. ನಮ್ಮ ಈ ದುಃಸ್ಥಿತಿಗೆ ಇಲ್ಲಿಯ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಇಲಾಖೆಯ ಮೇಲಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ. ಬಡತನದ ಬೇಗೆಯಲ್ಲಿ ಬೆಂದಿರುವ ಹಾಗೂ ಬಳಲುತ್ತಿರುವ ನಮ್ಮ ಸಹನೆಗೂ ಇತಿಮಿತಿ ಇದೆ. ಇದು ಹೀಗೆಯೇ ಮುಂದುವರಿದರೆ ಕಚೇರಿಯ ಆವರಣದಲ್ಲೇ ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.