ಲಖನೌ: ‘ಎರಡು–ಮೂರು ಮಕ್ಕಳ ತಾಯಿ ಮೇಲೆ ಯಾರೂ ಅತ್ಯಾಚಾರ ಎಸಗುವುದಿಲ್ಲ’ ಎಂದು ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಕುಲದೀಪ್ ಸಿಂಗ್ ಸೆಂಗರ್ನನ್ನು ಬೆಂಬಲಿಸಿ ಸುರೇಂದ್ರ ಈ ಹೇಳಿಕೆ ನೀಡಿದ್ದಾರೆ. ‘ಮನೋವಿಜ್ಞಾನ ಹೀಗೆ ಹೇಳುತ್ತದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ ರಾಜ್ಯದ ಬಿಜೆಪಿ ನಾಯಕರು ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ ಇದರಿಂದ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
‘ಆ ಮಹಿಳೆಯ ತಂದೆಯ ಮೇಲೆ ಸೆಂಗರ್ನ ಸೋದರ ಹಲ್ಲೆ ನಡೆಸಿರುವುದು ನಿಜವಿರಬಹುದು. ಆತ ತಪ್ಪು ಮಾಡಿದ್ದಲ್ಲಿ ಆತನಿಗೆ ಶಿಕ್ಷೆ ಆಗಲೇಬೇಕು’ ಎಂದೂ ಸುರೇಂದ್ರ ಹೇಳಿದ್ದಾರೆ.
ಉನ್ನಾವ್ ಪ್ರಕರಣದಿಂದ ಪಕ್ಷದ ಭವಿಷ್ಯಕ್ಕೆ ಕುಂದಾಗುತ್ತದೆ. ಸೆಂಗರ್ ವಿರುದ್ಧ ತಕ್ಷಣವೇ ಕ್ರಮ ತೆಗದುಕೊಳ್ಳದಿದ್ದರೆ, ಪಕ್ಷ ಅದರ ಫಲವನ್ನು ಅನುಭವಿಸಬೇಕಾಗುತ್ತದೆ ಎಂದು ಪಕ್ಷದ ವಕ್ತಾರೆ ದೀಪ್ತಿ ಭಾರದ್ವಾಜ್ ಕಳೆದ ವಾರ ಒತ್ತಾಯಿಸಿದ್ದರು.