ಕೆರಗೋಡು: ಜಿಲ್ಲೆಯಾದ್ಯಂತ ಏ. 14ರವರೆಗೆ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಬಂಕ್ ಮುಂದೆ ಪೆಟ್ರೋಲ್ ಹಾಕಿಸಲು ದ್ವಚಿಕ್ರ ವಾಹನ ಸವಾರರು ಸಾಲುಗಟ್ಟಿ ನಿಂತಿದ್ದರು.
ಪೆಟ್ರೋಲ್ ಹಾಕಿಸಿಕೊಳ್ಳುವ ಆತುರದಲ್ಲಿ ಸಾರ್ವಜನಿಕರು ಎಲ್ಲವನ್ನೂ ಮರೆತರು. ಸಾಮಾಜಿಕ ಅಂತರ ಕಾಯ್ದುಕೊಂಡು ಹಾಕಿಸಿಕೊಳ್ಳಲಿಲ್ಲ. ಹಲವರು ಮೊಬೈಲ್ ಮೂಲಕ ಸ್ನೇಹಿತರು, ಸಂಬಂಧಿಕರನ್ನು ಕರೆಸಿಕೊಳ್ಳುತ್ತಿದ್ದರು. ಕೆಲವರು ವಾಟರ್ ಬಾಟಲ್ಗಳಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೋದರು.