ಜನವರಿಯಿಂದ ಇಲ್ಲಿಯವರೆಗೆ ನಗರದ 15 ಕಡೆಗಳಲ್ಲಿ ಸರಗಳ್ಳತನ ವಾಗಿದೆ. ಕಳೆದ ವರ್ಷ 32 ಕಡೆ ದುಷ್ಕರ್ಮಿಗಳು ಸರಗಳನ್ನು ಎಗರಿಸಿ ದ್ದಾರೆ. ಹಬ್ಬ, ಹರಿದಿನಗಳು, ವಿಶೇಷ ದಿನದ ಸಂದರ್ಭದಲ್ಲೇ ಕಳ್ಳರು ಸರ ಕದ್ದಿದ್ದಾರೆ. ಆಷಾಢ ಮಾಸ ಆರಂಭವಾಗಿದ್ದು, ಮಹಿಳೆಯರು ಪೂಜೆ, ಪುನಸ್ಕಾರ, ವ್ರತ, ಹರಕೆ ತೀರಿಸಲು ದೇವಸ್ಥಾನಗಳಿಗೆ ತೆರಳುವುದು ಸಾಮಾನ್ಯವಾಗಿರುತ್ತದೆ. ಇಂತಹ ಸಮಯಕ್ಕೇ ಕಾಯುವ ಕಿಡಿಗೇಡಿಗಳು ಸರಗಳ್ಳತನ ಮಾಡಲು ಸಂಚು ರೂಪಿಸು ತ್ತಾರೆ. ಹೀಗಾಗಿ ವಿವಿಧೆಡೆ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ.