ಪಟ್ಟಣದ ಕಿರಂಗೂರು ವೃತ್ತದ ಬಳಿಯ ಬನ್ನಿಮಂಟಪದಿಂದ ಸೆ.28ರಂದು ಜಂಬೂ ಸವಾರಿಗೆ ಚಾಲನೆ ನೀಡುವ ಮೂಲಕ 5 ದಿನಗಳ ದಸರಾ ಉತ್ಸವ ಆರಂಭಗೊಳ್ಳಲಿದೆ. ಆದರೆ, ಬನ್ನಿಮಂಟಪದ ಬಳಿ ರಸ್ತೆ ತೀರಾ ಹಾಳಾಗಿದೆ. ಬನ್ನಿ ಮಂಟಪದಿಂದ ವೆಲ್ಲೆಸ್ಲಿ ಸೇತುವೆ ಕಡೆಯ ತಿರುವಿನಲ್ಲಿ ಒಂದು ಅಡಿಗೂ ಹೆಚ್ಚು ಆಳದ ಗುಂಡಿಗಳು ನಿರ್ಮಾಣವಾಗಿವೆ. ಹೊಂಡದಂತಿರುವ ಈ ಗುಂಡಿಗಳಲ್ಲಿ ನೀರು ತುಂಬಿದ್ದು, ವಾಹನ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.