ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಬೆಂಗಳೂರು ಹೆದ್ದಾರಿ ಕಾಮಗಾರಿ ಕಳಪೆಗೆ ಸಿಂಹ–ಸುಮಲತಾ ಕಾರಣ: ಮಳವಳ್ಳಿ ಶಾಸಕ

Last Updated 20 ಅಕ್ಟೋಬರ್ 2022, 11:17 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಕಾಮಗಾರಿ ಕಳಪೆಯಾಗಲು ಸಂಸದರಾದ ಪ್ರತಾಪ ಸಿಂಹ (ಮೈಸೂರು–ಕೊಡಗು) ಮತ್ತು ಸುಮಲತಾ (ಮಂಡ್ಯ) ಇಬ್ಬರೂ ಕಾರಣ’ ಎಂದು ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಈಗ ಮಾಡುತ್ತಿರುವ ರಸ್ತೆ ಸಂಪೂರ್ಣವಾಗಿ ಕಳಪೆಯಾಗಿದೆ. ಮೊದಲು ಇದ್ದ ರಸ್ತೆಯೇ ಬಹಳ ಉತ್ತಮವಾಗಿತ್ತು. ಯಾಕೆ ಕಳಪೆಯಾಗಿದೆ ಎಂಬುದಕ್ಕೆ ಸಂಸದರು ಉತ್ತರ ಕೊಡಲಿ‌’ ಎಂದರು.

ಮಂಡ್ಯ ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಆಣೆ–ಪ್ರಮಾಣಕ್ಕೆ ಪಂಥಾಹ್ವಾನ ಕೊಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಮಿಷನ್ ಎಂದರೇನು? ಪಡೆಯುವವರಿಗೆ ಮಾತ್ರ ಕಮಿಷನ್ ವಿಚಾರ ಗೊತ್ತಿರುತ್ತದೆ. ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಿದವರನ್ನೇ ಕೇಳಿ’ ಎಂದು ಹೇಳಿದರು.

‘ಸಿನಿಮಾ ರಂಗದಲ್ಲಿನ ಹಣ ಬಿಟ್ಟು ಮತ್ತ್ಯಾವ ಹಣವನ್ನೂ ಮುಟ್ಟಿಲ್ಲ ಎಂದು ಮೊದಲು ಅವರು ಪ್ರಮಾಣ ಮಾಡಲಿ. ಆ ಮೇಲೆ ನಮ್ಮದು ನೋಡೋಣ. ಅವರು ಕರೆದ ಕೂಡಲೇ ನಾವೇಕೆ ಹೋಗಬೇಕು?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT