ಮಂಡ್ಯ: ಶ್ರೀರಂಗಪಟ್ಣಣ ತಾಲ್ಲೂಕಿನ ತಡಗವಾಡಿ ಗ್ರಾಮ ಪಂಚಾಯಿತಿಯ ಪಿಡಿಒ ಅವರು ಸಾರ್ವಜನಿಕ ಕೆಲಸಗಳನ್ನು ಮಾಡಿಕೊಡದೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.
ಗ್ರಾ.ಪಂ.ಅಧ್ಯಕ್ಷ ಜಿ.ಎನ್.ಮಧುಗೌಡ ನೇತೃತ್ವದಲ್ಲಿ ಜಿ.ಪಂ.ಕಚೇರಿ ಎದುರು ಜಮಾಯಿಸಿದ ಸದಸ್ಯರು ಪಿಡಿಒ ವಿರುದ್ಧ ದಿಕ್ಕಾರ ಕೂಗಿದರು.
ಸರ್ಕಾರದ ನಿಯಮದಂತೆ ಯೋಜನೆ ಪಟ್ಟಿಕೊಡ ಲಾಗಿದೆ. ಅದನ್ನು ಪಿಡಿಒ ಅವರು ನಿರ್ಲಕ್ಷಿಸಿದ್ದಾರೆ. ಮನೆ ನಿರ್ಮಿಸಿಕೊಳ್ಳಲು ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಂಡಿದ್ದಾರೆ. ಅವರಿಗೆ ಅನುದಾನ ಬಿಡುಗಡೆಗೊಳಿಸಲು ಆಗುತ್ತಿಲ್ಲ. ಇದರಲ್ಲಿಯೂ ಪಿಡಿಒ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಕಳೆದ ಜನವರಿಯಿಂದಲೂ ಪಿಡಿಒ ಸರಿಯಾಗಿ ಲಭ್ಯವಿಲ್ಲದೆ ಮಾಹಿತಿಯೂ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಯೋಜನೆ ಬಗ್ಗೆಯೂ ಯಾವುದೇ ವಿಚಾರ ತಿಳಿಸದೆ ಕಾರ್ಯಕ್ರಮಗಳ ಅನುದಾನ ವಾಪಸ್ ಹೋಗುತ್ತಿವೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.