ಅಪಘಾತ ಎಸಗಿದ ಕಾರು ಚಾಲಕ ಬೆಂಗಳೂರು ನಗರದ ಪೋಲಿಸ್ ಕಾನ್ಸ್ಟೆಬಲ್ ಆಗಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಹಾಗೂ ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಪ್ರತಿಭಟನಕಾರರು ಕಿಡಿಕಾರಿದರು. ಶವವಿದ್ದ ಆಂಬುಲೆನ್ಸ್ ಹಿಂಬಾಲಿಸಿದ ಪ್ರತಿಭಟನಕಾರರು ಶಾಂತಿ ಕಾಲೇಜು ಮುಂಭಾಗ ಸೇರಿದರು. ಕಾಲೇಜಿನ ಮುಂಭಾಗದಲ್ಲೇ ಅಪಘಾತವಾಗಿದ್ದರೂ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಿದ್ದಾರೆ ಎಂದು ಆರೋಪಿಸಿ ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗಿದರು.