ಈ ಎಲ್ಲರ ಹಾರೈಕೆಗಳಿಂದ ಗಳಿಸಿಕೊಂಡಿದ್ದ ಆತ್ಮವಿಶ್ವಾಸ ಅನೀಶ್ ತೇಜಶ್ವರ್ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. ‘ಅಕಿರ’ ಚಿತ್ರದ ಸಂದರ್ಭದಲ್ಲಿಯೇ ನಿರ್ದೇಶಕರು ಈ ಚಿತ್ರದ ಕಥೆಹೇಳಿದ್ದರು. ಅದನ್ನೇ ಬೆಳೆಸಿಕೊಂಡು ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಮಾಡಿದ್ದೇವೆ. ಎಲ್ಲರೂ ಕಷ್ಟಪಟ್ಟು ಮಾಡಿರುವ ಸಿನಿಮಾ ಇದು. ನಿಶ್ಚಿಕಾ ನಾಯ್ಡು ಅಂಥ ಅಪ್ಪಟ ಕನ್ನಡ ಪ್ರತಿಭೆಯನ್ನು ಪರಿಚಯಿಸಿದ ಖುಷಿಯೂ ಇದೆ’ ಎಂದರು ಅನೀಶ್. ಅವರೇ ಈ ಚಿತ್ರಕ್ಕೆ ಹಣವನ್ನೂ ಹೂಡಿದ್ದಾರೆ. ನಿಶ್ಚಿಕಾ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಅಷ್ಟೇ ಹೇಳಿ ಸುಮ್ಮನಾದರು. ಅಜನೀಶ್ ಲೋಕನಾಥ್ ಸಂಗೀತ, ದಿಲೀಪ್ ಚಕ್ರವರ್ತಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ⇒v