ಗ್ರಾಮದ ಮಹಲಿಂಗ ಎಂಬುವರ 10 ತೆಂಗಿನ ಮರಗಳು ಮತ್ತು ರಾಮಚಂದ್ರ ಅವರ 8 ತೆಂಗಿನ ಮರಗಳು ಮುರಿದು ಬಿದ್ದಿವೆ. ಹಲಸು, ಸೀಬೆ ಮತ್ತು ಮಾವಿನ ಮರಗಳು, ದಾಳಿಂಬೆ, ನಿಂಬೆ ಗಿಡಗಳು ಉರುಳಿವೆ. ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ನಾಶವಾಗಿದೆ. ಟೊಮೆಟೊ, ಬೀನ್ಸ್ ಮತ್ತು ಸೌತೆಕಾಯಿ ಬೆಳೆಗಳು ನೆಲಕಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.