ಮಳವಳ್ಳಿ: ಪಟ್ಟಣದ ಗಂಗಾಮತ ಬಡಾವಣೆಯಲ್ಲಿ ಡಾ.ರಾಜ್ ಕಲಾ ಸಂಘದ ವತಿಯಿಂದ ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಬುಧವಾರ ಆಚರಿಸಲಾಯಿತು.
ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ‘ರಾಜ್ಕುಮಾರ್ ಅವರು ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದು ಮೇರುನಟರಾಗಿ ಬೆಳೆದು ಕನ್ನಡ ಭಾಷೆ, ಸಂಸ್ಕೃತಿಗೆ ಕೊಡುಗೆ ನೀಡಿದ್ದಾರೆ. ಅವರ ಚಲನಚಿತ್ರಗಳು ಸಮಾಜಕ್ಕೆ ಮಾದರಿಯಾಗಿವೆ. ಇಂದಿನ ಯುವ ಪೀಳಿಗೆ ಅವರ ಚಿತ್ರಗಳನ್ನು ನೋಡಬೇಕಿದೆ’ ಎಂದರು.
ಪ್ರಪಂಚದ ಪ್ರಬುದ್ಧ ನಟರ ಸಾಲಿನಲ್ಲಿ ರಾಜ್ಕುಮಾರ್ ನಿಲ್ಲುತ್ತಾರೆ. ರಂಗಭೂಮಿ, ಸಿನಿಮಾ, ಗಾಯನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡ ಮೇರು ವ್ಯಕ್ತಿ ಅವರು. ಅವರಿಗೆ ‘ಭಾರತರತ್ನ’ ಪುರಸ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಯಜಮಾನ್ ವಸಂತ, ಗೋವಿಂದರಾಜು, ಷರೀಫ್, ನಾಗರಾಜು, ತುಕಾರಾಂ, ಶಿವಣ್ಣ ಇದ್ದರು.