ಚನ್ನಪಟ್ಟಣ: ನಗರದಲ್ಲಿ ಭಾನುವಾರ ರಾಮನವಮಿ ಅಂಗವಾಗಿ ಅದ್ದೂರಿ ಶೋಭಾಯಾತ್ರೆ ನಡೆದಿದೆ.
ನಗರದ ಡೂಮ್ ಲೈಟ್ ವೃತ್ತದಿಂದ ಮಂಗಳವಾರಪೇಟೆ ವರೆಗೆ ಮೆರವಣಿಗೆ ಸಾಗಿದ್ದು, ಪುಟಾಣಿಗಳು ರಾಮ-ಸೀತೆ, ಲಕ್ಷ್ಮಣ ಹನುಮರ ವೇಷ ಧರಿಸಿ ರಥದಲ್ಲಿ ಕುಳಿತಿದ್ದಾರೆ. ಸಾವಿರಾರು ಮಂದಿ ಹೆಜ್ಜೆ ಹಾಕುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.