ರವಿಕೃಷ್ಣರೆಡ್ಡಿ ಹಾಗೂ 20ಕ್ಕೂ ಹೆಚ್ಚು ಸದಸ್ಯರು ಮಿನಿವಿಧಾನಸೌಧದ ಕಂದಾಯ ವಿಭಾಗಕ್ಕೆ ನುಗ್ಗಿ ಅಧಿಕಾರಿಗಳನ್ನು ನಿಂದಿಸಿದ್ದಾರೆ, ಮಹಿಳಾ ಸಿಬ್ಬಂದಿ ನಾಮಫಲಕ ಹಾಕಿಲ್ಲ ಎಂದು ಪ್ರಶ್ನಿಸಿ ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಕಂದಾಯ ಇಲಾಖೆ ನೌಕರರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ರವಿಕೃಷ್ಣರೆಡ್ಡಿ ಹಾಗೂ ಇತರ ಆರು ಮಂದಿಯನ್ನು ಬಂಧಿಸಿ, ಎಫ್ಐಆರ್ ದಾಖಲಿಸಿದ್ದಾರೆ.