ಪಟ್ಟಣದ ಈಶಾನ್ಯ ದಿಕ್ಕಿನಲ್ಲಿ ಕಾವೇರಿ ನದಿ ದಂಡೆಯಲ್ಲಿದ್ದ ಐತಿಹಾಸಿಕ ದೇಗುಲವನ್ನು ವರ್ಷದ ಹಿಂದೆ ತೆರವು ಮಾಡಲಾಗಿತ್ತು. ದೇವಾಲಯವನ್ನು ಕೆಡವಿದ ಬಳಿಕ ಗರ್ಭಗುಡಿಯಲ್ಲಿದ್ದ ಮೂರ್ತಿಯನ್ನು ಸಂರಕ್ಷಿಸಿ ಇಡಲಾಗಿತ್ತು. ಸ್ಥಳೀಯರ ಒತ್ತಾಯದ ಮೇರೆಗೆ ದೇವಾಲಯ ನಿರ್ಮಿಸಿಕೊಡುವುದಾಗಿ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಗುತ್ತಿಗೆ ಕಂಪನಿ ಭರವಸೆ ನೀಡಿತ್ತು. ಅದರಂತೆ ದೇವಾಲಯ ಇದ್ದ ಎಡ ಪಾರ್ಶ್ವದಲ್ಲಿ, 100 ಮೀಟರ್ ಅಂತರದಲ್ಲಿ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದೆ.