ಸಮಾವೇಶ ಉದ್ಘಾಟಿಸಿದ ಸಾಹಿತಿ ದೇವನೂರ ಮಹಾದೇವ ಮಾತನಾಡಿ ‘ಕಡಿಮೆ ನೀರು ಬಳಸಿ ಬೆಳೆಯುವ ಬೆಳೆಗಳ ಬಗ್ಗೆ ರೈತರಲ್ಲಿ ಬೃಹತ್ ಜಾಗೃತಿ ಮೂಡಬೇಕು. ನೀರಿನ ಅಪವ್ಯಯ ತಡೆಯಬೇಕು. ರಾಸಾಯನಿಕ ಬಳಸಿ ಕಬ್ಬು ಬೆಳೆಯುತ್ತಿರುವ ಕಾರಣ ಭೂಮಿ ಮುಂದೊಂದು ದಿನ ಬರಡಾಗುವ ಅಪಾಯವಿದೆ. ತಂಬಾಕು ಬೆಳೆಯಿಂದ ಕ್ಯಾನ್ಸರ್ ಬರುತ್ತದೆ, ಕ್ಯಾನ್ಸರ್ ಬಂದು ಸತ್ತಾಗ ಪರಿಹಾರ ಕೇಳುವ ಬದಲು ಈಗಲೇ ಪರ್ಯಾಯ ಬೆಳೆ ಬೆಳೆಯಬೇಕು’ ಎಂದರು.