<p><strong>ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ)</strong>: ತಾವು ಕಲಿತ ಸರ್ಕಾರಿ ಶಾಲೆ ಮುಂದಿನ ತಲೆಮಾರಿಗೂ ಉಳಿಯಲೆಂದು ನಿವೃತ್ತ ಎಂಜಿನಿಯರೊಬ್ಬರು ₹1.48 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ.</p>.<p>ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿ ನಿವೃತ್ತರಾಗಿರುವ ಕೆ.ಪಿ. ಶಿವಕುಮಾರ್ ಸರ್ಕಾರಿ ಶಾಲೆಗೆ ಕೊಡುಗೆ ನೀಡಿದವರು.</p>.<p>ಗ್ರಾಮಸ್ಥರ ಬೆಂಬಲ ಪಡೆದು ಸ್ವಂತ ಹಣವನ್ನು ಕಟ್ಟಡಕ್ಕೆ ವಿನಿಯೋಗಿಸಿದ್ದಾರೆ. ಈ ಕಾರಣದಿಂದ, ಇಲ್ಲಿ 38 ಇದ್ದ ಮಕ್ಕಳ ದಾಖಲಾತಿಯು ಶತಕ (116) ದಾಟಿದೆ. ಖಾಸಗಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ಇಲ್ಲಿ ಸೇರಿದ್ದಾರೆ. ‘ಜಯಮ್ಮ ಪುಟ್ಟೇಗೌಡ ಸರ್ಕಾರಿ ಶಾಲೆ’ ಎಂದು ನಾಮಕರಣಗೊಂಡಿದ್ದು, ಅವರ ಸೇವಾ ಕಾರ್ಯ ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.</p>.<p>ಕತ್ತರಘಟ್ಟದಲ್ಲಿ 7ನೇ ತರಗತಿವರೆಗೆ ಇದ್ದ ಸರ್ಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಶಿವಕುಮಾರ್ ಅವರ ತಂದೆಯೂ ಇದೇ ಶಾಲೆಯಲ್ಲಿ ಓದಿದ್ದರು. ಆರಂಭದಲ್ಲಿ ₹50 ಲಕ್ಷ ವೆಚ್ಚದಲ್ಲಿ ಕಟ್ಟಡ ಕಟ್ಟಿಸಿಕೊಡುವುದಾಗಿ ಶಿಕ್ಷಣ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆದರೆ, ನಿರ್ಮಾಣ ಪೂರ್ಣಗೊಳ್ಳುವ ವೇಳೆಗೆ ₹1.48 ಕೋಟಿ ವೆಚ್ಚವಾಗಿದೆ.</p>.<p>ಹೊಸದಾದ, ಬಹುಮಹಡಿ ಕಟ್ಟಡದಲ್ಲಿ ಪ್ರತಿ ತರಗತಿಗೆ ಒಂದು ಕೊಠಡಿ, ಗ್ರಂಥಾಲಯ, ವಿಶಾಲವಾದ ಸಭಾಂಗಣ, ವೇದಿಕೆ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಬೋಧಕರ ಕೊಠಡಿ ಸೇರಿದಂತೆ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ. ಡೆಸ್ಕ್ ಮತ್ತು ಪೀಠೋಪಕರಣಗಳನ್ನು ಕೊಡಿಸಿದ್ದಾರೆ. </p>.<p>‘ಶಿವಕುಮಾರ್ ಅವರು ಬೇಸಿಗೆ ರಜೆಯಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ 15 ದಿನಗಳವರೆಗೆ ‘ಅಜ್ಜಿ ಮನೆ ಬೇಸಿಗೆ ಶಿಬಿರ’ ನಡೆಸಿದ್ದಾರೆ. ಕತ್ತರಘಟ್ಟ ಮತ್ತು ಸುತ್ತಮುತ್ತಲ ಗ್ರಾಮಗಳ ಶಾಲಾ ಮಕ್ಕಳನ್ನು ಒಂದೆಡೆ ಸೇರಿಸಿ ರಂಗ ತರಬೇತಿ ಸೇರಿದಂತೆ ಚಿತ್ರಕಲೆ, ಪೇಪರ್ ಆರ್ಟ್, ನೃತ್ಯ, ಹಾಡು, ಸಂಗೀತ ಕಲಿಸುವ ಕೆಲಸ ನಡೆದಿದೆ. ವಿದ್ಯಾರ್ಥಿಗಳಿಗೆ ಒಂದು ದಿನ ಪ್ರವಾಸವನ್ನೂ ಮಾಡಿಸಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಬೆಟ್ಟಮ್ಮ ಮಾಹಿತಿ ನೀಡಿದರು. </p>.<p>‘ಕತ್ತರಘಟ್ಟ ಹೊಯ್ಸಳ ಅರಸರ ಕಾಲದಲ್ಲಿ ದಾನ–ಧರ್ಮಕ್ಕೆ ಹೆಸರಾಗಿತ್ತು. ಆ ದಾನ ಪರಂಪರೆಯು ಶಿವಕುಮಾರ್ ಅವರ ಮೂಲಕ ಮುಂದುವರಿದಿರುವುದು ನಿದರ್ಶನ’ ಎನ್ನುತ್ತಾರೆ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಕತ್ತರಘಟ್ಟ ವಾಸು.</p>.<div><blockquote>ಸರ್ಕಾರಿ ಶಾಲೆ ಉಳಿಸಿ ಬೆಳೆಸಲು ಇಂತಹ ದಾನಿಗಳ ಸಂಖ್ಯೆ ಹೆಚ್ಚಾಗಬೇಕು. ಇಲಾಖೆಯಿಂದ ಅಗತ್ಯ ನೆರವನ್ನು ನೀಡಲಾಗುವುದು </blockquote><span class="attribution">ವೈ.ಕೆ. ತಿಮ್ಮೇಗೌಡ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪೇಟೆ</span></div>.<div><blockquote>ನಾನು ಓದಿದ್ದ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ಗ್ರಾಮಸ್ಥರ ಬೆಂಬಲದಿಂದ ಶಾಲೆ ಉಳಿಸುವ ಪ್ರಯತ್ನ ಮಾಡಿದ್ದೇನೆ </blockquote><span class="attribution">ಕೆ.ಪಿ. ಶಿವಕುಮಾರ್ ನಿವೃತ್ತ ಎಂಜಿನಿಯರ್ ಕತ್ತರಘಟ್ಟ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ)</strong>: ತಾವು ಕಲಿತ ಸರ್ಕಾರಿ ಶಾಲೆ ಮುಂದಿನ ತಲೆಮಾರಿಗೂ ಉಳಿಯಲೆಂದು ನಿವೃತ್ತ ಎಂಜಿನಿಯರೊಬ್ಬರು ₹1.48 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ.</p>.<p>ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿ ನಿವೃತ್ತರಾಗಿರುವ ಕೆ.ಪಿ. ಶಿವಕುಮಾರ್ ಸರ್ಕಾರಿ ಶಾಲೆಗೆ ಕೊಡುಗೆ ನೀಡಿದವರು.</p>.<p>ಗ್ರಾಮಸ್ಥರ ಬೆಂಬಲ ಪಡೆದು ಸ್ವಂತ ಹಣವನ್ನು ಕಟ್ಟಡಕ್ಕೆ ವಿನಿಯೋಗಿಸಿದ್ದಾರೆ. ಈ ಕಾರಣದಿಂದ, ಇಲ್ಲಿ 38 ಇದ್ದ ಮಕ್ಕಳ ದಾಖಲಾತಿಯು ಶತಕ (116) ದಾಟಿದೆ. ಖಾಸಗಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ಇಲ್ಲಿ ಸೇರಿದ್ದಾರೆ. ‘ಜಯಮ್ಮ ಪುಟ್ಟೇಗೌಡ ಸರ್ಕಾರಿ ಶಾಲೆ’ ಎಂದು ನಾಮಕರಣಗೊಂಡಿದ್ದು, ಅವರ ಸೇವಾ ಕಾರ್ಯ ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.</p>.<p>ಕತ್ತರಘಟ್ಟದಲ್ಲಿ 7ನೇ ತರಗತಿವರೆಗೆ ಇದ್ದ ಸರ್ಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಶಿವಕುಮಾರ್ ಅವರ ತಂದೆಯೂ ಇದೇ ಶಾಲೆಯಲ್ಲಿ ಓದಿದ್ದರು. ಆರಂಭದಲ್ಲಿ ₹50 ಲಕ್ಷ ವೆಚ್ಚದಲ್ಲಿ ಕಟ್ಟಡ ಕಟ್ಟಿಸಿಕೊಡುವುದಾಗಿ ಶಿಕ್ಷಣ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆದರೆ, ನಿರ್ಮಾಣ ಪೂರ್ಣಗೊಳ್ಳುವ ವೇಳೆಗೆ ₹1.48 ಕೋಟಿ ವೆಚ್ಚವಾಗಿದೆ.</p>.<p>ಹೊಸದಾದ, ಬಹುಮಹಡಿ ಕಟ್ಟಡದಲ್ಲಿ ಪ್ರತಿ ತರಗತಿಗೆ ಒಂದು ಕೊಠಡಿ, ಗ್ರಂಥಾಲಯ, ವಿಶಾಲವಾದ ಸಭಾಂಗಣ, ವೇದಿಕೆ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಬೋಧಕರ ಕೊಠಡಿ ಸೇರಿದಂತೆ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ. ಡೆಸ್ಕ್ ಮತ್ತು ಪೀಠೋಪಕರಣಗಳನ್ನು ಕೊಡಿಸಿದ್ದಾರೆ. </p>.<p>‘ಶಿವಕುಮಾರ್ ಅವರು ಬೇಸಿಗೆ ರಜೆಯಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ 15 ದಿನಗಳವರೆಗೆ ‘ಅಜ್ಜಿ ಮನೆ ಬೇಸಿಗೆ ಶಿಬಿರ’ ನಡೆಸಿದ್ದಾರೆ. ಕತ್ತರಘಟ್ಟ ಮತ್ತು ಸುತ್ತಮುತ್ತಲ ಗ್ರಾಮಗಳ ಶಾಲಾ ಮಕ್ಕಳನ್ನು ಒಂದೆಡೆ ಸೇರಿಸಿ ರಂಗ ತರಬೇತಿ ಸೇರಿದಂತೆ ಚಿತ್ರಕಲೆ, ಪೇಪರ್ ಆರ್ಟ್, ನೃತ್ಯ, ಹಾಡು, ಸಂಗೀತ ಕಲಿಸುವ ಕೆಲಸ ನಡೆದಿದೆ. ವಿದ್ಯಾರ್ಥಿಗಳಿಗೆ ಒಂದು ದಿನ ಪ್ರವಾಸವನ್ನೂ ಮಾಡಿಸಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಬೆಟ್ಟಮ್ಮ ಮಾಹಿತಿ ನೀಡಿದರು. </p>.<p>‘ಕತ್ತರಘಟ್ಟ ಹೊಯ್ಸಳ ಅರಸರ ಕಾಲದಲ್ಲಿ ದಾನ–ಧರ್ಮಕ್ಕೆ ಹೆಸರಾಗಿತ್ತು. ಆ ದಾನ ಪರಂಪರೆಯು ಶಿವಕುಮಾರ್ ಅವರ ಮೂಲಕ ಮುಂದುವರಿದಿರುವುದು ನಿದರ್ಶನ’ ಎನ್ನುತ್ತಾರೆ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಕತ್ತರಘಟ್ಟ ವಾಸು.</p>.<div><blockquote>ಸರ್ಕಾರಿ ಶಾಲೆ ಉಳಿಸಿ ಬೆಳೆಸಲು ಇಂತಹ ದಾನಿಗಳ ಸಂಖ್ಯೆ ಹೆಚ್ಚಾಗಬೇಕು. ಇಲಾಖೆಯಿಂದ ಅಗತ್ಯ ನೆರವನ್ನು ನೀಡಲಾಗುವುದು </blockquote><span class="attribution">ವೈ.ಕೆ. ತಿಮ್ಮೇಗೌಡ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪೇಟೆ</span></div>.<div><blockquote>ನಾನು ಓದಿದ್ದ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ಗ್ರಾಮಸ್ಥರ ಬೆಂಬಲದಿಂದ ಶಾಲೆ ಉಳಿಸುವ ಪ್ರಯತ್ನ ಮಾಡಿದ್ದೇನೆ </blockquote><span class="attribution">ಕೆ.ಪಿ. ಶಿವಕುಮಾರ್ ನಿವೃತ್ತ ಎಂಜಿನಿಯರ್ ಕತ್ತರಘಟ್ಟ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>