‘ಕಳೆದ 95 ದಿನಗಳಿಂದ ನಡೆಸುತ್ತಿರುವ ಹೋರಾಟದ ಬಗ್ಗೆ ಫೆ.17ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸಮಿತಿ ಸಭೆ ಕರೆದಿದ್ದು, ಶಾಸಕರ ಮನೆ ಮುಂದೆ ಧರಣಿ, ರಸ್ತೆ ತಡೆ, ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ತಗ್ಗಹಳ್ಳಿ ಪ್ರಸನ್ನ, ಜಗದೀಶ್ ಬೆಳ್ಳೂಂಡಗೆರೆ, ಕಾಂತರಾಜು, ನಾಗಣ್ಣ ಚಿಕ್ಕಮಂಡ್ಯ ಇದ್ದರು.