ಗೋವಿಂದನಹಳ್ಳಿಯಲ್ಲಿ ಪಂಚ ಲಿಂಗೇಶ್ವರ ದೇವಸ್ಥಾನವನ್ನು ನಿರ್ಮಿಸಿದ ಶಿಲ್ಪಿಗಳು, ಅಲ್ಲಿ ಉಳಿದಿದ್ದ ಸಾಮಗ್ರಿ ಗಳನ್ನು ಬಳಸಿಕೊಂಡು ಊಗಿನಹಳ್ಳಿ ಯಲ್ಲಿ ಈಶ್ವರ ದೇವಾಲಯ ನಿರ್ಮಿಸಲು ಮುಂದಾಗಿದ್ದರು. ಕೋಳಿ ಕೂಗಿ ಬೆಳಕು ಹರಿಯುವುದರೊಳಗೆ 12 ಕಂಬಗಳ ದೇವಸ್ಥಾನವನ್ನು ನಿರ್ಮಿಸಲು ಹೊರಟಿದ್ದರು. ಆದರೆ, ಅದು ಶಿಲ್ಪಿಗಳಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ದೇವಸ್ಥಾನ ನಿರ್ಮಾಣ ವಾಗಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.