ಮಠವು ವಿಶೇಷವಾಗಿ ಮೆಡಿಕಲ್ ಕಾಲೇಜುಗಳ ಸ್ಥಾಪನೆ, ಕರ್ನಾಟಕ ವನ ಸಂವರ್ಧನೆ, ಹಲವು ಗೋಶಾಲೆಗಳು, ಉತ್ತರ ಕರ್ನಾಟಕದಲ್ಲಿ ಮಠ ಮಾಡಿರುವ ಕೆಲಸ, ಕಾಶಿಯನ್ನು ಒಳಗೊಂಡಂತೆ ಉತ್ತರ ಭಾರತದಲ್ಲಿ ಮಾಡಿರುವ ಕೆಲಸ, ವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಅನೇಕ ಬಗೆಯ ಶಿಕ್ಷಣ ದಾಸೋಹ ಹಾಗೂ ಅಕ್ಷರ ದಾಸೋಹಗಳನ್ನು ಮಠದ ಮೂಲಕ ಹಿರಿಯ ಸ್ವಾಮೀಜಿ ಮಾಡಿದ್ದರು. ಅವರಿಗೆ ದೂರದೃಷ್ಟಿ ಇತ್ತು. ಕಾಯಕಲ್ಪದ ಗುಣ ಇತ್ತು. ಆ ನಿಟ್ಟಿನಲ್ಲಿ ಪ್ರಸ್ತುತ ನಿರ್ಮಲಾನಂದನಾಥ ಸ್ವಾಮೀಜಿ ಸಾಗುತ್ತಿದ್ದಾರೆ ಎಂದು ಅವರು ಹೇಳಿದರು.