ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 5-30ಕ್ಕೆ ನಿತ್ಯ ಪೂಜಾ ಕೈಂಕರ್ಯಗಳನ್ನು ಆರಂಭಿಸಿ 8 ಗಂಟೆ ವೇಳೆಗೆ ಮುಕ್ತಾಯ ಮಾಡಲಾಯಿತು. ನಂತರ ಸ್ನಪನಪೂರ್ವಕವಾಗಿ ಕಳಸಗಳನ್ನು ಸ್ಥಾಪಿಸಿ ಚೆಲುವನಾರಾಯಣಸ್ವಾಮಿ, ಯದುಗಿರಿನಾಯಕಿ ಅಮ್ಮನವರು, ಆಚಾರ್ಯ ರಾಮಾನುಜಾಚಾರ್ಯರು ನಮ್ಮಾಳ್ವಾರ್ ವಿಶ್ವಕ್ಸೇನರಿಗೆ ಮಹಾಭಿಷೇಕ ನೆರವೇರಿಸಲಾಯಿತು. ಹಾಲು ಮೊಸರು, ಚಂದನ, ಮುಂತಾದ ದಿವ್ಯಪರಿಕರಗಳಿಂದ ಭಗವಂತನಿಗೆ ಅಭಿಷೇಕ ನೆರವೇರಿಸಿ ನಾಡಿನೆಲ್ಲೆಡೆ ಹರುತ್ತಿರುವ ಸಾಂಕ್ರಾಮಿಕ ಮಹಾಮಾರಿ ಕೊರೊನಾ ವೈರಸ್ ನಾಶವಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಮಹಾಭಿಷೇಕದಲ್ಲಿ ಪಾಲ್ಗೊಂಡಿದ್ದರು.