ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದ ಅಂಗವಾಗಿ ಬೆಳಿಗ್ಗೆ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ, ಸಂಜೆ ಕಲ್ಯಾಣೋತ್ಸವ ಮತ್ತು ಮಹಾರಾಜರ ಭಕ್ತ ವಿಗ್ರಹಕ್ಕೆ ವಿಶೇಷ ಆರಾಧನೆ ನಡೆಯಲಿದೆ. ನಂತರ ಪ್ರತಿ ದಿನ ಯಾಗಶಾಲೆ, ಬ್ರಹ್ಮೋತ್ಸವದ ವಿಶೇಷ ಕಾರ್ಯಕ್ರಗಳು ನಡೆಯಲಿದೆ. ಹೊರಭಾಗ ನಡೆಯುತ್ತಿದ್ದ ಉತ್ಸವಗಳು, ವಾಹನೋತ್ಸವ ಕಲ್ಯಾಣಿಯಲ್ಲಿ ನಡೆಯಬೇಕಿದ್ದ ತೀರ್ಥಸ್ನಾನ, ಮಹೋತ್ಸವಗಳನ್ನು ದೇವಾಲಯದ ಒಳಭಾಗದಲ್ಲೇ ನಡೆಸಲು ತೀರ್ಮಾನಿಸಲಾಗಿದೆ ಎಂದರು.