<p>ಶ್ರೀರಂಗಪಟ್ಟಣ: ತಾಲ್ಲೂಕಿನ ಕಿರಂಗೂರು ಮತ್ತು ದರಸಗುಪ್ಪೆ ಗ್ರಾಮಗಳ ನಡುವೆ, ಚಾಮರಾಜನಗರ– ಬೀದರ್ ಹೆದ್ದಾರಿ ಪಕ್ಕದಲ್ಲಿದ್ದ ಐತಿಹಾಸಿಕ ಮಂಟಪ (ಮೂಲೆ ಮಂಟಪ)ವನ್ನು ರಸ್ತೆ ಅಗಲೀಕರಣ ಕಾಮಗಾರಿ ನಡೆಸುತ್ತಿರುವವರು ನೆಲಸಮ ಮಾಡಿದ್ದಾರೆ.</p>.<p>ಆಳರಸರ ಕಾಲದ ಪಳೆಯುಳಿಕೆಯಾಗಿದ್ದ ಮಹತ್ವದ ಈ ಮಂಟಪ ‘ಮೂಲೆ ಮಂಟಪ’ ಎಂದೇ ಪ್ರಸಿದ್ಧಿಯಾಗಿತ್ತು. ಶ್ರೀರಂಗಪಟ್ಟಣವನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ನಡೆಸಿದ ಮೈಸೂರು ಒಡೆಯರ್ ವಂಶದ ಆರಂಭಿಕ ದೊರೆಗಳ ಕಾಲದಲ್ಲಿ ಈ ಮಂಟಪ ನಿರ್ಮಾಣವಾಗಿತ್ತು. ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವರ</p>.<p>ವೈರಮುಡಿ ಉತ್ಸವದ ವೇಳೆ ಈ ಮಂಟಪವನ್ನು ಅರವಟ್ಟಿಗೆಯಾಗಿ ಬಳಸಲಾಗುತ್ತಿತ್ತು. ಪಾದಯಾಚಾರಿಗಳು ವಿಶ್ರಾಂತಿ ಪಡೆಯಲೆಂದು ಮತ್ತು ಮಜ್ಜಿಗೆ, ನೀರು, ಪಾನಕ ವಿತರಿಸುವ ಉದ್ದೇಶದಿಂದ ಒಡೆಯರ್ ಕಾಲದಲ್ಲಿ ಇಂತಹ ಅರವಟ್ಟಿಗೆಗಳು ಸಾಕಷ್ಟು ನಿರ್ಮಾಣಗೊಂಡಿದ್ದವು. ಆ ಪೈಕಿ ‘ಮೂಲೆ ಮಂಟಪ’ ಕೂಡ ಆಸಪಾಸಿನ ಹತ್ತಾರು ಊರುಗಳಲ್ಲಿ ಹೆಸರಾಗಿತ್ತು.</p>.<p>ಇಂತಹ ಮಹತ್ವದ ಮಂಟಪವನ್ನು ನೆಲಸಮ ಮಾಡಿರುವುದಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.</p>.<p>‘ಹಳೆಯ ಕಿರಂಗೂರು ಸಮೀಪ ಇದ್ದ ಮೂಲೆ ಮಂಟಪ ಐತಿಹಾಸಿಕ ಪಳೆಯುಳಿಕೆಯಾಗಿತ್ತು. ರಸ್ತೆ ಅಗಲೀಕರಣ ಮಾಡುವವರು ಈ ಮಂಟಪವನ್ನು ನೆಲಸಮ ಮಾಡಿದ್ದು, ಪಾರಂಪರಿಕ ಮತ್ತು ಐತಿಹಾಸಿಕ ಸಾಕ್ಷಿಯೊಂದನ್ನು ನಾಶ ಮಾಡಿದ್ದಾರೆ. ಅದನ್ನು ಪುನರ್ ನಿರ್ಮಾಣ ಮಾಡಬೇಕು’ ಎಂದು ಹಿಂದೂ ಜಾಗರಣಾ ವೇದಿಕೆ ಮುಖಂಡ ಕೆ. ಚಂದನ್ ಆಗ್ರಹಿಸಿದ್ದಾರೆ.</p>.<p>‘ಸುರಕಿ ಗಾರೆ ಮತ್ತು ಕಲ್ಲು ಚಪ್ಪಡಿಗಳನ್ನು ಬಳಸಿ ನಿರ್ಮಿಸಿದ್ದ ಅಪರೂಪದ ಶಿಲಾ ಮಂಟವನ್ನು ಕೆಡವಿದ್ದರೂ ಪ್ರಾಚ್ಯವಸ್ತು ಇಲಾಖೆ ಇತ್ತ ಗಮನ ಹರಿಸಿಲ್ಲ. ಇದು ಆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ’ ಎಂದು ಉದ್ಯೋಗದಾತ ಸಂಸ್ಥೆ ಮುಖ್ಯಸ್ಥ ಡಿ.ಬಿ. ರುಕ್ಮಾಂಗದ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-40-91032930</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀರಂಗಪಟ್ಟಣ: ತಾಲ್ಲೂಕಿನ ಕಿರಂಗೂರು ಮತ್ತು ದರಸಗುಪ್ಪೆ ಗ್ರಾಮಗಳ ನಡುವೆ, ಚಾಮರಾಜನಗರ– ಬೀದರ್ ಹೆದ್ದಾರಿ ಪಕ್ಕದಲ್ಲಿದ್ದ ಐತಿಹಾಸಿಕ ಮಂಟಪ (ಮೂಲೆ ಮಂಟಪ)ವನ್ನು ರಸ್ತೆ ಅಗಲೀಕರಣ ಕಾಮಗಾರಿ ನಡೆಸುತ್ತಿರುವವರು ನೆಲಸಮ ಮಾಡಿದ್ದಾರೆ.</p>.<p>ಆಳರಸರ ಕಾಲದ ಪಳೆಯುಳಿಕೆಯಾಗಿದ್ದ ಮಹತ್ವದ ಈ ಮಂಟಪ ‘ಮೂಲೆ ಮಂಟಪ’ ಎಂದೇ ಪ್ರಸಿದ್ಧಿಯಾಗಿತ್ತು. ಶ್ರೀರಂಗಪಟ್ಟಣವನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ನಡೆಸಿದ ಮೈಸೂರು ಒಡೆಯರ್ ವಂಶದ ಆರಂಭಿಕ ದೊರೆಗಳ ಕಾಲದಲ್ಲಿ ಈ ಮಂಟಪ ನಿರ್ಮಾಣವಾಗಿತ್ತು. ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವರ</p>.<p>ವೈರಮುಡಿ ಉತ್ಸವದ ವೇಳೆ ಈ ಮಂಟಪವನ್ನು ಅರವಟ್ಟಿಗೆಯಾಗಿ ಬಳಸಲಾಗುತ್ತಿತ್ತು. ಪಾದಯಾಚಾರಿಗಳು ವಿಶ್ರಾಂತಿ ಪಡೆಯಲೆಂದು ಮತ್ತು ಮಜ್ಜಿಗೆ, ನೀರು, ಪಾನಕ ವಿತರಿಸುವ ಉದ್ದೇಶದಿಂದ ಒಡೆಯರ್ ಕಾಲದಲ್ಲಿ ಇಂತಹ ಅರವಟ್ಟಿಗೆಗಳು ಸಾಕಷ್ಟು ನಿರ್ಮಾಣಗೊಂಡಿದ್ದವು. ಆ ಪೈಕಿ ‘ಮೂಲೆ ಮಂಟಪ’ ಕೂಡ ಆಸಪಾಸಿನ ಹತ್ತಾರು ಊರುಗಳಲ್ಲಿ ಹೆಸರಾಗಿತ್ತು.</p>.<p>ಇಂತಹ ಮಹತ್ವದ ಮಂಟಪವನ್ನು ನೆಲಸಮ ಮಾಡಿರುವುದಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.</p>.<p>‘ಹಳೆಯ ಕಿರಂಗೂರು ಸಮೀಪ ಇದ್ದ ಮೂಲೆ ಮಂಟಪ ಐತಿಹಾಸಿಕ ಪಳೆಯುಳಿಕೆಯಾಗಿತ್ತು. ರಸ್ತೆ ಅಗಲೀಕರಣ ಮಾಡುವವರು ಈ ಮಂಟಪವನ್ನು ನೆಲಸಮ ಮಾಡಿದ್ದು, ಪಾರಂಪರಿಕ ಮತ್ತು ಐತಿಹಾಸಿಕ ಸಾಕ್ಷಿಯೊಂದನ್ನು ನಾಶ ಮಾಡಿದ್ದಾರೆ. ಅದನ್ನು ಪುನರ್ ನಿರ್ಮಾಣ ಮಾಡಬೇಕು’ ಎಂದು ಹಿಂದೂ ಜಾಗರಣಾ ವೇದಿಕೆ ಮುಖಂಡ ಕೆ. ಚಂದನ್ ಆಗ್ರಹಿಸಿದ್ದಾರೆ.</p>.<p>‘ಸುರಕಿ ಗಾರೆ ಮತ್ತು ಕಲ್ಲು ಚಪ್ಪಡಿಗಳನ್ನು ಬಳಸಿ ನಿರ್ಮಿಸಿದ್ದ ಅಪರೂಪದ ಶಿಲಾ ಮಂಟವನ್ನು ಕೆಡವಿದ್ದರೂ ಪ್ರಾಚ್ಯವಸ್ತು ಇಲಾಖೆ ಇತ್ತ ಗಮನ ಹರಿಸಿಲ್ಲ. ಇದು ಆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ’ ಎಂದು ಉದ್ಯೋಗದಾತ ಸಂಸ್ಥೆ ಮುಖ್ಯಸ್ಥ ಡಿ.ಬಿ. ರುಕ್ಮಾಂಗದ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-40-91032930</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>