<p><strong>ಶ್ರೀರಂಗಪಟ್ಟಣ</strong>: ಪಟ್ಟಣ ಹಾಗೂ ಆಸುಪಾಸಿನಲ್ಲಿ, ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮ ತಡೆಗೆ ಪುರಸಭೆ ಇದೇ ಮೊದಲ ಬಾರಿಗೆ ಟೆಂಡರ್ ನಡೆಸಿದೆ.</p>.<p>ಪಟ್ಟಣದ ಪಶ್ಚಿಮವಾಹಿನಿ, ಸ್ನಾನ ಘಟ್ಟ, ಕಾವೇರಿ ಸಂಗಮ ಹಾಗೂ ದೊಡ್ಡ ಗೋಸಾಯಿಘಾಟ್ ಬಳಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಟೆಂಡರ್ ಕರೆದು ಜವಾಬ್ದಾರಿ ನೀಡಲಾಗಿದೆ. ಗುತ್ತಿಗೆದಾರರೊಬ್ಬರು ₹95 ಲಕ್ಷಕ್ಕೆ ಅಸ್ಥಿ ವಿಸರ್ಜನೆಯ ಟೆಂಡರ್ ಪಡೆದಿದ್ದಾರೆ. ನಿಗದಿತ ನಾಲ್ಕು ಸ್ಥಳಗಳಲ್ಲಿ ಮಾತ್ರ ಅಸ್ಥಿ ವಿಸರ್ಜನೆ ಮಾಡಬೇಕು. ಅಧಿಕೃತ ಗುರುತಿನ ಚೀಟಿ ಹೊಂದಿರುವ ನೋಂದಾಯಿತ ಪುರೋಹಿತರು ಮಾತ್ರ ಅಸ್ಥಿ ವಿಸರ್ಜನೆ ಕೈಂಕರ್ಯಗಳನ್ನು ನಡೆಸಬೇಕು. ಪ್ರತಿ ಅಸ್ಥಿ ವಿಸರ್ಜನೆಗೆ ₹100 ಶುಲ್ಕ ಪಡೆಯಬೇಕು ಎಂದು ಟೆಂಡರ್ದಾರರಿಗೆ ಷರತ್ತು ವಿಧಿಸಲಾಗಿದೆ.</p>.<p>‘ಪಟ್ಟಣದ ಪಶ್ಚಿಮವಾಹಿನಿ ಇತರೆಡೆ ಅಸ್ಥಿ ವಿಸರ್ಜಿಸಲು ರಾಜ್ಯ, ಹೊರ ರಾಜ್ಯಗಳಿಂದಲೂ ಜನರು ಬರುತ್ತಾರೆ. ಆದರೆ ಅಸ್ಥಿ ವಿಸರ್ಜನೆಯ ಶುಲ್ಕದ ಹಣ ಸ್ವಚ್ಛತೆ, ಸಿಬ್ಬಂದಿಯ ಸಂಬಳಕ್ಕೂ ಸಾಲುತ್ತಿರಲಿಲ್ಲ. ಪುರಸಭೆಗೆ ಪ್ರತಿ ವರ್ಷ ₹7 ಲಕ್ಷ ನಷ್ಟ ಉಂಟಾಗುತ್ತಿತ್ತು. ಈ ನಷ್ಟ ತಪ್ಪಿಸಲು ಟೆಂಡರ್ ನಡೆಸಲಾಗಿದೆ. ಇನ್ನು ಮುಂದೆ ಅಸ್ಥಿ ವಿಸರ್ಜನೆ ಇತರ ಮೂಲಗಳಿಂದ ವಾರ್ಷಿಕ ₹1 ಕೋಟಿಗೂ ಹೆಚ್ಚು ಆದಾಯ ಬರಲಿದೆ’ ಎಂದು ಪುರಸಭೆ ಅಧ್ಯಕ್ಷ ಎಂ.ಎಲ್. ದಿನೇಶ್ ತಿಳಿಸಿದ್ದಾರೆ.</p>.<p>ಅಸ್ಥಿ ವಿಸರ್ಜನೆ ಸ್ಥಳದಲ್ಲಿ ಫಲಕ ಹಾಕಬೇಕು. ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ ಹೇಳಿದ್ದಾರೆ.</p>.<div><blockquote>ಗುರುತಿನ ಚೀಟಿ ಹೊಂದಿರುವ ಅರ್ಚರು ಮಾತ್ರ ಅಸ್ಥಿ ವಿಸರ್ಜನೆಯ ಕಾರ್ಯ ನಡೆಸಬೇಕು. ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಟೆಂಡರ್ದಾರರಿಗೆ ದಂಡ ವಿಧಿಸಲಾಗುವುದು </blockquote><span class="attribution">ಎಂ. ರಾಜಣ್ಣ ಪುರಸಭೆ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ</strong>: ಪಟ್ಟಣ ಹಾಗೂ ಆಸುಪಾಸಿನಲ್ಲಿ, ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮ ತಡೆಗೆ ಪುರಸಭೆ ಇದೇ ಮೊದಲ ಬಾರಿಗೆ ಟೆಂಡರ್ ನಡೆಸಿದೆ.</p>.<p>ಪಟ್ಟಣದ ಪಶ್ಚಿಮವಾಹಿನಿ, ಸ್ನಾನ ಘಟ್ಟ, ಕಾವೇರಿ ಸಂಗಮ ಹಾಗೂ ದೊಡ್ಡ ಗೋಸಾಯಿಘಾಟ್ ಬಳಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಟೆಂಡರ್ ಕರೆದು ಜವಾಬ್ದಾರಿ ನೀಡಲಾಗಿದೆ. ಗುತ್ತಿಗೆದಾರರೊಬ್ಬರು ₹95 ಲಕ್ಷಕ್ಕೆ ಅಸ್ಥಿ ವಿಸರ್ಜನೆಯ ಟೆಂಡರ್ ಪಡೆದಿದ್ದಾರೆ. ನಿಗದಿತ ನಾಲ್ಕು ಸ್ಥಳಗಳಲ್ಲಿ ಮಾತ್ರ ಅಸ್ಥಿ ವಿಸರ್ಜನೆ ಮಾಡಬೇಕು. ಅಧಿಕೃತ ಗುರುತಿನ ಚೀಟಿ ಹೊಂದಿರುವ ನೋಂದಾಯಿತ ಪುರೋಹಿತರು ಮಾತ್ರ ಅಸ್ಥಿ ವಿಸರ್ಜನೆ ಕೈಂಕರ್ಯಗಳನ್ನು ನಡೆಸಬೇಕು. ಪ್ರತಿ ಅಸ್ಥಿ ವಿಸರ್ಜನೆಗೆ ₹100 ಶುಲ್ಕ ಪಡೆಯಬೇಕು ಎಂದು ಟೆಂಡರ್ದಾರರಿಗೆ ಷರತ್ತು ವಿಧಿಸಲಾಗಿದೆ.</p>.<p>‘ಪಟ್ಟಣದ ಪಶ್ಚಿಮವಾಹಿನಿ ಇತರೆಡೆ ಅಸ್ಥಿ ವಿಸರ್ಜಿಸಲು ರಾಜ್ಯ, ಹೊರ ರಾಜ್ಯಗಳಿಂದಲೂ ಜನರು ಬರುತ್ತಾರೆ. ಆದರೆ ಅಸ್ಥಿ ವಿಸರ್ಜನೆಯ ಶುಲ್ಕದ ಹಣ ಸ್ವಚ್ಛತೆ, ಸಿಬ್ಬಂದಿಯ ಸಂಬಳಕ್ಕೂ ಸಾಲುತ್ತಿರಲಿಲ್ಲ. ಪುರಸಭೆಗೆ ಪ್ರತಿ ವರ್ಷ ₹7 ಲಕ್ಷ ನಷ್ಟ ಉಂಟಾಗುತ್ತಿತ್ತು. ಈ ನಷ್ಟ ತಪ್ಪಿಸಲು ಟೆಂಡರ್ ನಡೆಸಲಾಗಿದೆ. ಇನ್ನು ಮುಂದೆ ಅಸ್ಥಿ ವಿಸರ್ಜನೆ ಇತರ ಮೂಲಗಳಿಂದ ವಾರ್ಷಿಕ ₹1 ಕೋಟಿಗೂ ಹೆಚ್ಚು ಆದಾಯ ಬರಲಿದೆ’ ಎಂದು ಪುರಸಭೆ ಅಧ್ಯಕ್ಷ ಎಂ.ಎಲ್. ದಿನೇಶ್ ತಿಳಿಸಿದ್ದಾರೆ.</p>.<p>ಅಸ್ಥಿ ವಿಸರ್ಜನೆ ಸ್ಥಳದಲ್ಲಿ ಫಲಕ ಹಾಕಬೇಕು. ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ ಹೇಳಿದ್ದಾರೆ.</p>.<div><blockquote>ಗುರುತಿನ ಚೀಟಿ ಹೊಂದಿರುವ ಅರ್ಚರು ಮಾತ್ರ ಅಸ್ಥಿ ವಿಸರ್ಜನೆಯ ಕಾರ್ಯ ನಡೆಸಬೇಕು. ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಟೆಂಡರ್ದಾರರಿಗೆ ದಂಡ ವಿಧಿಸಲಾಗುವುದು </blockquote><span class="attribution">ಎಂ. ರಾಜಣ್ಣ ಪುರಸಭೆ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>