<p><strong>ಮದ್ದೂರು:</strong> ಶಾಸಕ ಕೆ.ಎಂ. ಉದಯ್ ಅವರ ಬಗ್ಗೆ ದಲಿತ ಮುಖಂಡರೆನಿಸಿಕೊಂಡಿರುವ ಒಬ್ಬ ವ್ಯಕ್ತಿ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ತಿಳಿಸಿದರು.</p>.<p>ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ವೇದಿಕೆಯ ಸದಸ್ಯರು ಹಾಗೂ ಮುಖಂಡರೊಂದಿಗೆ ನಡೆದ ಸಭೆಯ ಬಳಿಕ ಅವರು ಮಾತನಾಡಿದರು.</p>.<p>‘ಸೋಮನಹಳ್ಳಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ನೇತೃತ್ವ ವಹಿಸಿದ್ದ ವ್ಯಕ್ತಿಯೊಬ್ಬರು ಶಾಸಕರ ಬಗ್ಗೆ ಆಧಾರರಹಿತವಾಗಿ ಅವರ ತೇಜೋವಧೆ ಮಾಡಲು ಹೊರಟಿರುವುದು ತರವಲ್ಲ. ಈ ಕೂಡಲೇ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಶಾಸಕರ ವಿರುದ್ಧ ಆರೋಪಿಸಿರುವ ದಲಿತ ಮುಖಂಡ ಈ ಹಿಂದೆ ಜಾತಿ ನಿಂದನೆ, ಬೆದರಿಸಿ ಹಣ ಮಾಡಿದವರು ಹಾಗೂ ದಲಿತರ ನಿವೇಶನಗಳನ್ನು ಕಬಳಿಸಿರುವ ಬಗ್ಗೆ ಗೊತ್ತಿದೆ. ಪದೇ ಪದೇ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಆ ವ್ಯಕ್ತಿಯ ಇತಿಹಾಸವನ್ನು ತೆಗೆಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.</p>.<p>ದಲಿತ ಮುಖಂಡರಾದ ಚಿದಂಬರಮೂರ್ತಿ, ಅಮೀನ್ ಶಿವಲಿಂಗಯ್ಯ, ತಿಮ್ಮಯ್ಯ, ಅರುವನಹಳ್ಳಿ ಸಿದ್ದರಾಜು, ಬಸವರಾಜು, ಮರಿದೇವರು, ಆಲೂರು ಕುಮಾರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು:</strong> ಶಾಸಕ ಕೆ.ಎಂ. ಉದಯ್ ಅವರ ಬಗ್ಗೆ ದಲಿತ ಮುಖಂಡರೆನಿಸಿಕೊಂಡಿರುವ ಒಬ್ಬ ವ್ಯಕ್ತಿ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ತಿಳಿಸಿದರು.</p>.<p>ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ವೇದಿಕೆಯ ಸದಸ್ಯರು ಹಾಗೂ ಮುಖಂಡರೊಂದಿಗೆ ನಡೆದ ಸಭೆಯ ಬಳಿಕ ಅವರು ಮಾತನಾಡಿದರು.</p>.<p>‘ಸೋಮನಹಳ್ಳಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ನೇತೃತ್ವ ವಹಿಸಿದ್ದ ವ್ಯಕ್ತಿಯೊಬ್ಬರು ಶಾಸಕರ ಬಗ್ಗೆ ಆಧಾರರಹಿತವಾಗಿ ಅವರ ತೇಜೋವಧೆ ಮಾಡಲು ಹೊರಟಿರುವುದು ತರವಲ್ಲ. ಈ ಕೂಡಲೇ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಶಾಸಕರ ವಿರುದ್ಧ ಆರೋಪಿಸಿರುವ ದಲಿತ ಮುಖಂಡ ಈ ಹಿಂದೆ ಜಾತಿ ನಿಂದನೆ, ಬೆದರಿಸಿ ಹಣ ಮಾಡಿದವರು ಹಾಗೂ ದಲಿತರ ನಿವೇಶನಗಳನ್ನು ಕಬಳಿಸಿರುವ ಬಗ್ಗೆ ಗೊತ್ತಿದೆ. ಪದೇ ಪದೇ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಆ ವ್ಯಕ್ತಿಯ ಇತಿಹಾಸವನ್ನು ತೆಗೆಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.</p>.<p>ದಲಿತ ಮುಖಂಡರಾದ ಚಿದಂಬರಮೂರ್ತಿ, ಅಮೀನ್ ಶಿವಲಿಂಗಯ್ಯ, ತಿಮ್ಮಯ್ಯ, ಅರುವನಹಳ್ಳಿ ಸಿದ್ದರಾಜು, ಬಸವರಾಜು, ಮರಿದೇವರು, ಆಲೂರು ಕುಮಾರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>