ಭಾರತೀನಗರ: ಇಲ್ಲಿಗೆ ಸಮೀಪದ ಕೂಳಗೆರೆ ಗ್ರಾಮದಲ್ಲಿ ಈಚೆಗೆ ನಡೆದ ನ್ಯಾಯ ಪಂಚಾಯಿತಿಗೆ ಮನನೊಂದ, ಗ್ರಾಮದ ತಿಬ್ಬೇಗೌಡರ ಪುತ್ರ ಯೋಗೇಶ (35) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯೋಗೇಶ ಗ್ರಾಮದ ಮಹಿಳೆಯೊಬ್ಬರ ಜತೆ ಈಚೆಗೆ ಅಸಭ್ಯವಾಗಿ ವರ್ತಿಸಿದ್ದು, ಇದರಿಂದ ಗ್ರಾಮದ ಹಿರಿಯರು ನ್ಯಾಯ ಪಂಚಾಯಿತಿ ನಡೆಸಿ, ₹ 50,000 ದಂಡ ವಿಧಿಸಿದ್ದರು ಎನ್ನಲಾಗಿದೆ.
ಇದರಿಂದ ಮನನೊಂದ ಯೋಗೇಶ 3 ದಿನದ ಹಿಂದೆಯೇ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈತನಿಗೆ ಪತ್ನಿ, ಪುತ್ರ ಇದ್ದಾರೆ ಎಂದು ಮದ್ದೂರು ಪೊಲೀಸರು ತಿಳಿಸಿದ್ದಾರೆ.