ತಾಲ್ಲೂಕಿನ ಕಬ್ಬಿನಕೆರೆಯ ನರೇಂದ್ರ ಮಾಲೀಕತ್ವದ ಕ್ರಷರ್, ಗಂಗಸಮುದ್ರ ಗ್ರಾಮದ ರವಿಕುಮಾರ್ ಅವರ ಕ್ರಷರ್, ಕೆಂಪನಕೊಪ್ಪಲು ಗ್ರಾಮದ ದೇವರಾಜ್ ಮಾಲೀಕತ್ವದ ವೆಂಕಟೇಶ್ವರ ಸ್ಟೋನ್ ಕ್ರಷರ್, ವಡ್ಡರಹಳ್ಳಿಯ ಅಯ್ಯಪ್ಪ ಸ್ಟೋನ್ ಕ್ರಷರ್ಗಳು ಸೇರಿದಂತೆ ಬೇಗಮಂಗಲ ಮತ್ತು ವಡೇರಪುರ ಗ್ರಾಮಗಳಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ 7 ಜಲ್ಲಿ ಕ್ರಷರ್ಗಳ ಮೇಲೆ ಸೋಮವಾರ ಬೆಳಿಗ್ಗೆ ತಹಶೀಲ್ದಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಉದಯರವಿ ಮತ್ತು ಪ್ರಸನ್ನ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಭೂಪರಿವರ್ತನೆಯಾಗದ ಹಿನ್ನೆಲೆಯಲ್ಲಿ ಸೀಲ್ ಮಾಡಿದ್ದಾರೆ.