ಪ್ರತಿ ದಿನ ಸುಮಾರು 200 ಜನರಿಗೆ ತನ್ಮಯ ಅವರು ಕಾಫಿ, ಟೀ, ಬ್ರೆಡ್, ಬಿಸ್ಕೆಟ್ ಹಂಚುತ್ತಿದ್ದಾರೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಕಿರಂಗೂರು ಬನ್ನಿ ಮಂಟಪ ಸರ್ಕಲ್, ರೈಲು ನಿಲ್ದಾಣ, ಶ್ರೀರಂಗನಾಥ ದೇವಾಲಯದ ಉದ್ಯಾನ, ಕಾವೇರಿ ನದಿ ಸೋಪಾನಕಟ್ಟೆ, ಆಂಜನೇಯನ ಗುಡಿ ಇತರೆಡೆ ಇರುವ ನಿರಾಶ್ರಿತರಿಗೆ ಬ್ರೆಡ್, ಬಿಸ್ಕಿಟ್ ವಿತರಿಸುತ್ತಿದ್ದಾರೆ. ಇದಕ್ಕಾಗಿ ಪ್ರತಿದಿನ ಐದಾರು ಸಾವಿರ ಹಣವನ್ನು ಅವರು ಖರ್ಚು ಮಾಡುತ್ತಿದ್ದಾರೆ.