‘ನಾನು ಗ್ಯಾರೇಜ್ ಮುಂದೆ ಕುಳಿತಿದ್ದೆ. ನಾಲ್ವರು ಮುಂದಿನ ರಸ್ತೆಯಲ್ಲಿ ಎರಡು ಬಾರಿ ಓಡಾಡಿದ್ದನ್ನು ಗಮನಿಸಿದೆ. ಅವರಲ್ಲಿ ಇಬ್ಬರು ಬೈಕ್ನಲ್ಲಿ ಬಂದು ಕಣ್ಣು ಬಿಟ್ಟು ತೆರೆಯುವಷ್ಟರಲ್ಲಿ ಹಣ ಎಗರಿಸಿದರು. ಕಳ್ಳರನ್ನು ನಾನು ನೋಡಿದ್ದು ಅವರನ್ನು ಗುರುತಿಸುತ್ತೇನೆ. ಟೈರ್ಗೆ ಮುಳ್ಳು, ಮೊಳೆ ಚುಚ್ಚಿಲ್ಲ. ಯಾರೋ ಪಂಕ್ಚರ್ ಮಾಡಿರುವಂತಿದೆ ಎಂದು ಮೆಕ್ಯಾನಿಕ್ ಹೇಳಿದ. ಆತ ಹೇಳಿದ ಒಂದೆರಡು ನಿಮಿಷದಲ್ಲಿ ಕಳ್ಳತನವಾಯಿತು’ ಎಂದು ಹಣ ಕಳೆದುಕೊಂಡ ಸಯ್ಯದ್ ಸಮೀಉಲ್ಲಾ ಹೇಳಿದರು.