ಕುಮಾರಿ (45), ನಾಗರತ್ನಾ (33), ಸುಮಾ (26) ಗಾಯಗೊಂಡವರು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮನೆಯ ಸಮೀಪ ನಿರ್ಮಾಣ ಹಂತದ ಚರಂಡಿ ಇದೆ. ಇಲ್ಲಿ ಸಂಗ್ರಹವಾಗುವ ನೀರು ಮನೆಯ ತನಕ ಹರಡುತ್ತದೆ. ಬೆಳಿಗ್ಗೆ ಮನೆ ಮುಂದಿನ ಕೊಟ್ಟಿಗೆಗೆ ಸಂಪರ್ಕಿಸುವ ವಿದ್ಯುತ್ ತಂತಿಯು ಬಟ್ಟೆ ಒಣಗಿಸಲು ಇಳಿಬಿಟ್ಟಿದ್ದ ತಂತಿಗೆ ತಗುಲಿ ಈ ಅವಘಡ ಸಂಭವಿಸಿದೆ.