‘ಪ್ರಜಾವಾಣಿ’ಯೊಂದಿಗೆ ಮಾತನಾಡಿದಜಯರಾಮು, ಸುಮಾರು 1 ವರ್ಷದಿಂದ ಕೊರೊನಾ ದಿಂದಾಗಿ ಸಾರಿಗೆ ಸಂಸ್ಥೆಗೆ ನಷ್ಟವಾಗಿರುವುದನ್ನು ನೌಕರರಾದ ನಾವು ಮನಗಾಣಬೇಕು. ಕೊರೊನಾ ಮುಕ್ತವಾದಾಗ ವೇತನ ಹೆಚ್ಚಿಸಲು ಬೇಡಿಕೆ ಸಲ್ಲಿಸುವುದರಲ್ಲಿ ಅರ್ಥವಿದೆ ಎಂಬುದು ನನ್ನ ಭಾವನೆ. ಇದನ್ನು ಎಲ್ಲ ನೌಕರರು ಅರ್ಥ ಮಾಡಿಕೊಳ್ಳಬೇಕು. ಇಂಥ ಸನ್ನಿವೇಶದಲ್ಲಿ ಮುಷ್ಕರ ಮಾಡುತ್ತಾ ಹೋದರೆ ಸಂಸ್ಥೆಗೆ, ನೌಕರರಿಗೆ ಹಾಗೂ ಸಾರಿಗೆ ಸಂಸ್ಥೆಯ ಬಸ್ಸುಗಳನ್ನೇ ಅವಲಂಬಿಸಿರುವ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು.