ವಿಶ್ವಮಟ್ಟದ ಚಿಂತನೆಗಳು, ಗ್ರಹಿಕೆ, ಪ್ರಪಂಚದ ಶ್ರೇಷ್ಠ ಅನುಭವಗಳು ಕನ್ನಡದಲ್ಲಿ ನಮಗೆ ಸಿಗಬೇಕು. ಮನುಷ್ಯ ಕುಲ ಕಟ್ಟುವ ಸಾಹಿತ್ಯ, ಚಿತ್ರಕಲೆ, ಸಂಗೀತ, ವಿಜ್ಞಾನ, ಕ್ರೀಡೆ ಎಲ್ಲ ಧಾತುಗಳು ಕನ್ನಡದಲ್ಲಿ ದೊರತರೆ ಆಕರ್ಷಕವಾಗಿರುತ್ತದೆ. ವಿಶ್ವದ ಸ್ಪರ್ಧೆಯಲ್ಲಿ ಕನ್ನಡಿಗರು ಎದ್ದು ನಿಲ್ಲುತ್ತಾರೆ. ಆಗ ಮಾತ್ರ ಮುಕ್ತ ಮನಸ್ಸಿನಿಂದ ಕನ್ನಡವನ್ನು ಆಹ್ವಾನಿಸಿ ಕೊಳ್ಳುತ್ತಾರೆ ಎಂದು ಹೇಳಿದರು.