ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ

Last Updated 9 ಜೂನ್ 2018, 9:20 IST
ಅಕ್ಷರ ಗಾತ್ರ

ಬಾದಾಮಿ: ‌ಪಟ್ಟಣದ ಸೇರಿದಂತೆ ಬೇಲೂರ, ಕುಳಗೇರಿ ಮತ್ತು ಪಟ್ಟದಕಲ್ಲು ಭಾಗದಲ್ಲಿ ಶುಕ್ರವಾರ ಎರಡು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಿತು. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಸಜ್ಜಾಗಿರುವ ರೈತರ ಮೊಗದಲ್ಲಿ ಈ ಮಳೆ ಮಂದಹಾಸ ಮೂಡಿಸಿದೆ.

ಮೃಗಶಿರಾ ಮಳೆ ಮಧ್ಯಾಹ್ನ 12ರಿಂದ 2 ಗಂಟೆಯ ವರೆಗೂ ಸುರಿಯಿತು. ಬೇಲೂರ, ಮಣ್ಣೇರಿ, ಹಿರೇನಸಬಿ ಚಿಕ್ಕನಸಬಿ, ಚೊಳಚಗುಡ್ಡ, ಖ್ಯಾಡ , ಕಾತರಕಿ, ಅಡಗಲ್‌, ಕಬ್ಬಲಗೇರಿ, ಕುಟುಕನಕೇರಿ, ಕೆಂದೂರ ,ಬಿ.ಎನ್‌. ಜಾಲಿಹಾಳ, ನಂದಿಕೇಶ್ವರ, ಮಹಾಕೂಟ, ನೆಲವಗಿ ಗ್ರಾಮಗಳ ಸುತ್ತ ಮುತ್ತ ವರ್ಷಧಾರೆಯಾಗಿದೆ.

ಮೊದಲೇ ಬಿತ್ತನೆ ಮಾಡಿದ ಹೊಲಗಳಲ್ಲಿ ಪೈರು ಬೆಳೆದಿದ್ದು ಅವರಿಗೆ ಮಳೆಯಿಂದ ಅನುಕೂಲವಾಗಿದೆ. ಅಲ್ಲದೆ ಬಿತ್ತನೆ ಕಾರ್ಯವನ್ನು ಸಹ ಮಳೆ ಸರಾಗವಾಗಿಸಿದೆ ಎಂದು ರೈತ ಬಸಪ್ಪ ಪಾಟೀಲ ಹೇಳಿದರು. ಬಾದಾಮಿ ಬೆಟ್ಟದ ಮೇಲಿಂದ ಜೋಡಿ ಜಲಪಾತಗಳು ಅಗಸ್ತ್ಯತೀರ್ಥ ಹೊಂಡಕ್ಕೆ ಧುಮ್ಮಿಕ್ಕಿದವು. ನಿಸರ್ಗ ಪ್ರಿಯರು ಜಲಪಾತಗಳನ್ನು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT