‘ಕರಿಘಟ್ಟದಲ್ಲಿ ಆಲ, ಅರಳಿ, ಬೇವು, ಹೊಂಗೆ ಗಿಡಗಳು ಬಾಡುತ್ತಿದ್ದವು. ಸಮುದ್ರ ಮಟ್ಟದಿಂದ ಸುಮಾರು 4 ಸಾವಿರ ಅಡಿಗಳ ಎತ್ತರದಲ್ಲಿರುವ ಕರಿಘಟ್ಟದ ತುದಿಗೆ ವಾಹನಗಳು ಹೋಗಲು ಸಾಧ್ಯವಿಲ್ಲ. ಹೀಗಾಗಿ, ಅಡ್ಡೆ ಕಟ್ಟಿಕೊಂಡು ನೀರು ಸಾಗಿಸಿ ಉಣಿಸುತ್ತಿದ್ದೇವೆ. ಗಿಡಗಳ ಬೇರಿನ ಸುತ್ತ ಒಣಗಿದ ಎಲೆ, ಹುಲ್ಲುಗಳನ್ನು ಮುಚ್ಚಿ ತೇವಾಂಶ ಆರದಂತೆ ನೋಡಿ ಕೊಳ್ಳುತ್ತಿದ್ದೇವೆ. ವಿವಿಧ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು ಕೈ ಜೋಡಿಸುತ್ತಿದ್ದಾರೆ. ಇನ್ನೂ ಕೆಲವು ದಿನ ನೀರುಣಿಸುತ್ತೇವೆ’ ಎಂದು ರಮೇಶ್ ಹೇಳಿದರು.