‘ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು. ಅವರೇ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ನನ್ನ ಸಂಪೂರ್ಣ ಬೆಂಬಲ ಇರಲಿದೆ. ಅವರಿಂದಾದರೂ ಮಂಡ್ಯ ಜಿಲ್ಲೆ ಸಂಪೂರ್ಣ ಅಭಿವೃದ್ಧಿಯಾಗುತ್ತದೆ. ಅವರೇ ಬಂದರೆ ಒಳ್ಳೆಯದು, ಆ ಮೂಲಕ ಜನಾನುರಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕನಸುಗಳು ನನಸಾಗುತ್ತವೆ. ಅವರು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಾಕಷ್ಟು ಕನಸುಗಳು ಇಟ್ಟುಕೊಂಡಿದ್ದರು. ಅವರು ಇಲ್ಲಿ ಗೆದ್ದರೆ ಅವೆಲ್ಲವೂ ಸಾಕಾರಗೊಳ್ಳುತ್ತವೆ’ ಎಂದರು.