ಸೇತುವೆಯ ಕೆಳಗೆ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದೆ. ಕಳೆದ ಮುಂಗಾರು ಹಂಗಾಮು ವೇಳೆ ಕೊಚ್ಚಿಕೊಂಡು ಬಂದ ಮರಗಳು ಮತ್ತು ಹುಲ್ಲಿನ ತ್ಯಾಜ್ಯ ಸೇತುವೆಗೆ ಸಿಕ್ಕಿಕೊಂಡಿದೆ. ಸದ್ಯ ಈ ಕಸ ಒಣಗಿದ್ದು, ಕಾವೇರಿ ನದಿಯಲ್ಲಿ ಮೀನು ಹಿಡಿಯಲು ಬರುವವರು ಬೆಂಕಿ ಹಚ್ಚುತ್ತಿದ್ದಾರೆ. ಭಾನುವಾರ ಹಚ್ಚಿರುವ ಬೆಂಕಿಗೆ ಸೇತುವೆಯ ಒಂದು ಪಾರ್ಶ್ವದಲ್ಲಿದ್ದ ಮರ ಮುಟ್ಟುಗಳು ಸುಟ್ಟು ಹೋಗಿವೆ. ಸ್ಥಳೀಯರು ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದು, ಬೆಂಕಿಯನ್ನು ನಂದಿಸಲಾಗಿದೆ.