ಕುದುರೆ ಕಲ್ಲು ಗುಡ್ಡ, ಅಲ್ಲಾಪಟ್ಟಣ ಗಡಿ, ಸಿಡಿಎಸ್ ನಾಲೆ ಗಡಿ, ಶಿಖರ ಭಾಗದಲ್ಲಿ ಏಕ ಕಾಲದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರ್ಧ ದಿನ ಉರಿಯುತ್ತಲೇ ಇತ್ತು. ಬಿಸಿಲಿನ ತಾಪ ಮತ್ತು ಗಾಳಿ ಬೀಸಿದ ಕಾರಣ ಬೆಂಕಿ ನಂದಿಸಲು ಸಾಧ್ಯವಾಗದೆ ಅರಣ್ಯ ಇಲಾಖೆ ಸಿಬ್ಬಂದಿ ಪರದಾಡಿದರು. ಒಂದು ಕಡೆ ಬೆಂಕಿ ನಂದಿಸಿದರೆ ಮತ್ತೊಂದು ಕಡೆ ಬೆಂಕಿ ಹರಡುತ್ತಲೇ ಇತ್ತು. ಬೆಂಕಿ ರೇಖೆ ದಾಟಿಕೊಂಡು ಬೆಂಕಿ ಮುನ್ನುಗ್ಗುತ್ತಿತ್ತು.