‘ಭಾರತ ಶಾಂತಿಯ ತೋಟ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ನಿತ್ಯ ಶೋಷಣೆ, ಹಿಂಸೆ ನಡೆಯುತ್ತಲೇ ಇದೆ. ಇವುಗಳು ನಮ್ಮ ಸುತ್ತ ಮುತ್ತಲೂ ನಡೆಯುತ್ತಿವೆ. ಎಲ್ಲಿಯವರೆಗೂ ಹಿಂಸೆ, ಅಶಾಂತಿ, ದಬ್ಬಾಳಿಕೆ, ಕ್ರೌರ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲವೋ ಅಲ್ಲಿಯವರೆಗೆ ಶಾಂತಿ ಕೂಗು ಕಮರಿ ಹೋಗುತ್ತದೆ. ಯುದ್ಧದ ವಿರುದ್ಧ, ಹಿಂಸೆಯ ವಿರುದ್ಧ ದನಿ ಎತ್ತಬೇಕು’ ಎಂದು ಸಲಹೆ ನೀಡಿದರು.