ಎರಡು ವಾರದ ಹಿಂದೆ ಜಿನುಗು ಮಳೆ ಬಂದರೂ ಭೂಮಿಯಲ್ಲಿ ಹೆಚ್ಚಿನ ತೇವಾಂಶ ಸಾಧ್ಯವಾಗಲಿಲ್ಲ, ಈಗ ಬಿಸಿಲು ಗಾಳಿ ಬೀಸಿದ್ದರಿಂದ ಭೂಮಿ ಗಟ್ಟಿಯಾಗಿ ಒಣಗಿದೆ. ತಡವಾಗಿ ಬಿತ್ತನೆಯಾಗಿರುವ ಮೆಕ್ಕೆಜೋಳ, ಸಜ್ಜೆ, ತೊಗರೆ ಇತರೆ ಬೆಳೆಗಳಿಗೂ ಮಳೆಯ ಅಗತ್ಯವಿದೆ. ಆದರೆ ದಟ್ಟ ಮೋಡ ಕವಿದರೂ ಮಳೆ ಬರುತ್ತಿಲ್ಲ. ಇದೇ ಸ್ಥಿತಿ ಮುಂದುವರೆದರೆ ಬೆಳೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮುಂದೆ ಮಳೆಯಾದರೂ ಬೆಳೆಗಳಿಗೆ ಪ್ರಯೋಜನವಾಗುವುದಿಲ್ಲ ಎಂದು ವಿವಿಧ ಗ್ರಾಮಗಳ ರೈತರು ಹೇಳಿದರು.