‘ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ ಅವರ ತತ್ವ ಸಿದ್ಧಾಂತಗಳಂತೆ ರಾಜಕೀಯ ಮಾಡಿ, ಅಧಿಕಾರವನ್ನು ಅನುಭವಿಸಿದ್ದೇನೆ. ಸಚಿವ ಸ್ಥಾನ ನೀಡದಿರುವ ಬಗ್ಗೆ ಎಳ್ಳಷ್ಟೂ ಬೇಸರವಿಲ್ಲ. ನನ್ನನ್ನು ಯಾರೂ ಪಕ್ಷದಲ್ಲಿ ಜೀತಕ್ಕೆ ಇಟ್ಟುಕೊಂಡಿಲ್ಲ. ಇನ್ನು ಮುಂದೆ ರಾಜಕೀಯ ಸಾಕು ಎನಿಸುತ್ತಿದೆ. ಸೋತು ಸಾರ್ವಜನಿಕರಿಂದ ಛೀ.. ಥೂ ಅಂತ ಉಗಿಸಿಕೊಳ್ಳುವುದು ಬೇಡ ಅಂತ ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದರು.