ಸತ್ಯಹರಿಶ್ಚಂದ್ರರ ಮೊಮ್ಮಕ್ಕಳಾ?: ಹಾಸನ, ಮಂಡ್ಯದಲ್ಲಿ ನಡೆದ ಐ.ಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಐ.ಟಿ ದಾಳಿಗೆ ವಿರೋಧವಿಲ್ಲ. ಆದರೆ ರಾಜಕೀಯ ಪ್ರೇರಿತ ಆಗಿರಬಾರದು. ಚುನಾವಣೆ ಸಮಯಲ್ಲೇ ಏಕೆ ದಾಳಿ ಮಾಡಬೇಕು ಎಂದು ಪ್ರಶ್ನಿಸಿದರು. ಬಿಜೆಪಿಯವರೆಲ್ಲ ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾ. ನಮ್ಮ ಶಾಸಕರಿಗೆ ₹ 25ರಿಂದ 30 ಕೋಟಿ ಆಮಿಷ ಮಾಡಿರುವ ಯಡಿಯೂರಪ್ಪ ಮನೆ ಮೇಲೆ ದಾಳಿ ನಡೆಸಲಿ. ಈಶ್ವರಪ್ಪ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ ಅವರ ಮನೆಗಳನ್ನು ಶೋಧಿಸುವಂತೆ ಆಗ್ರಹಿಸಿದರು.