ಮೈಸೂರು: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶದ ಆಸುಪಾಸಿನಲ್ಲಿ ಇದ್ದ ನಗರದ 42 ಮಂದಿಯನ್ನು ಗುರುತಿಸಿ, ಅವರನ್ನು ‘ಹೋಂ ಕ್ವಾರಂಟೈನ್’ಗೆ ಒಳಪಡಿಸಲಾಗಿದೆ.
ಇವರಲ್ಲಿ ಕೇವಲ ಮುಸ್ಲಿಮರು ಮಾತ್ರವಲ್ಲ, ಹಿಂದೂಗಳು, ಕ್ರೈಸ್ತರೂ ಇದ್ದಾರೆ. ಇವರೆಲ್ಲರೂ ಧಾರ್ಮಿಕ ಸಮಾವೇಶ ನಡೆದಿದ್ದ ದಿನಗಳಲ್ಲಿ ಸಮಾವೇಶದ ಆಸುಪಾಸಿನಲ್ಲಿ ವಿವಿಧ ಕಾರಣಗಳಿಗೆ ಭೇಟಿ ನೀಡಿದ್ದರು. ಹೀಗಾಗಿ, ಇವರ ಮೇಲೆ ಮನೆಯಲ್ಲೇ ನಿಗಾ ಇಡಲಾಗಿದೆ ಎಂದು ಡಿಸಿಪಿ ಪ್ರಕಾಶಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.