‘ಎರಡೂ ವಿಭಾಗಗಳ ತಜ್ಞ ವೈದ್ಯರು ದಿನದ 24 ಗಂಟೆಗಳ ಕಾಲವೂ ಇಲ್ಲಿ ಲಭ್ಯವಿದ್ದು, ಬಂದವರಿಗೆ ತ್ವರಿತ ಚಿಕಿತ್ಸೆ ನೀಡಲಿದ್ದಾರೆ. ಸಾರ್ವಜನಿಕರು ಗಾಯಗಳಾದಾಗ ಆತಂಕಪಡದೇ ತಕ್ಷಣವೇ ಆಸ್ಪತ್ರೆಗೆ ಬರಬೇಕು’ ಎಂದು ಆಸ್ಪತ್ರೆ ಮತ್ತು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ.ಸಿ.ಪಿ.ನಂಜ ರಾಜ್ ಮನವಿ ಮಾಡಿದ್ದಾರೆ.