ಸಂವಿಧಾನ ಒಪ್ಪದ ಕೇಂದ್ರವು ತನ್ನದೇಯಾದ ಸಂವಿಧಾನವನ್ನು ಒಳಗಿಟ್ಟುಕೊಂಡು ಆಳ್ವಿಕೆ ಮಾಡುತ್ತಿದೆ. ಸಂವಿಧಾನ ಇಲ್ಲವಾಗಿಸಲು ಸಾಧ್ಯವಾಗದೇ ಇದ್ದಾಗ ಸಿಎಎ, ಎನ್ಆರ್ಸಿ ಮೂಲಕ ಅದರ ಶೀಲ ಕೆಡಿಸಿದೆ. ಆರ್ಥಿಕವಾಗಿ ದುರ್ಬಲರು ಎಂಬ ಹೆಸರಿನಲ್ಲಿ ಮೀಸಲಾತಿ ಕೊಟ್ಟು, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಕಲ್ಪನೆಯನ್ನೇ ನೆಲ ಕಚ್ಚಿಸಿಬಿಟ್ಟರು. ಸಾಮಾಜಿಕ ನ್ಯಾಯವನ್ನು ಅಂಗಾತ ಮಲಗಿಸಿ ಬಿಟ್ಟರು ಎಂದು ಕಿಡಿಕಾರಿದರು.
ಜಿಎಸ್ಟಿ ಮೂಲಕ ರಾಜ್ಯಗಳನ್ನು ಭಿಕ್ಷೆ ಕೇಳುವ ಸ್ಥಿತಿಗೆ ದೂಡಿಬಿಟ್ಟಿದೆ. ಇಂದು ನಿಜಕ್ಕೂ ರಾಜ್ಯಗಳಿಗೆ ಅಸ್ತಿತ್ವ ಇದೆಯಾ, ಒಕ್ಕೂಟ ಸ್ಪರೂಪ ದೇಶದಲ್ಲಿದೆಯೇ ಎಂಬುದನ್ನು ಅವಲೋಕಿಸಬೇಕಿದೆ. ರಾಜ್ಯಗಳು ಪಕ್ಷಾತೀತವಾಗಿ ಎಚ್ಚರಗೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.