ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಭಿಷೇಕ್ ತಂದೆ ಸುದೇಶ್ ಚಂದ್ ಭಟ್, ‘ಬುಧವಾರ ವೀಸಾ ಸಿಗಲಿದ್ದು, ನನ್ನ ಸಹೋದರರಿಬ್ಬರು ನಮ್ಮೊಂದಿಗೆ ಬರಲಿದ್ದಾರೆ. ಗುರುವಾರ, ಬೆಂಗಳೂರಿನಿಂದ ಲಾಸ್ಎಂಜಲೀಸ್ಗೆ ವಿಮಾನದ ಮೂಲಕ ತೆರಳಿ, ಅಲ್ಲಿಂದ ರಸ್ತೆ ಮಾರ್ಗದಲ್ಲಿ ಸ್ಯಾನ್ ಬರ್ನಾರ್ಡಿನೊಗೆ ಹೊರಡಲಾಗುವುದು. ಅಲ್ಲಿಯೇ ಅಭಿಷೇಕ್ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ’ ಎಂದು ಹೇಳಿದರು.