ವಿಜಯನಗರ 4ನೇ ಹಂತದ ನಿವಾಸಿ ಸ್ವೀಕಾರ್ (28) ಮೃತಪಟ್ಟವ. ಹೆಬ್ಬಾಳಿನ ಭರತ್ ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ಸಂಜೆ 7.30ರ ವೇಳೆಗೆ ನಗರದ ಹೊರ ವಲಯದಲ್ಲಿರುವ ರಿಂಗ್ ರೋಡ್ನಿಂದ ವಿಜಯನಗರ 4ನೇ ಹಂತದ ಕಡೆಗೆ ಹೋಗುವಾಗ, ಸವಾರನ ನಿಯಂತ್ರಣ ತಪ್ಪಿದ ಬೈಕ್, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ವಿ.ವಿ.ಪುರಂ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.