ತಾಲ್ಲೂಕಿನ ನೇರಳೆ ಗ್ರಾಮದ ಮಹದೇವನಾಯಕರ ಮಗ ಮಹೇಶ (17) ಹಾಗೂ ಈತನ ಚಿಕ್ಕಮ್ಮ ಜವರನಾಯ್ಕರ ಪತ್ನಿ ಮಂಜುಳಾ (31) ಮೃತಪಟ್ಟವರು.
ನೋಟ್ ಪುಸ್ತಕಗಳನ್ನು ತುಂಬಿಕೊಂಡು ಮೈಸೂರಿನಿಂದ ಚಾಮರಾಜನಗರದ ಕಡೆಗೆ ಹೋಗುತ್ತಿದ್ದ ಸರಕು ಸಾಗಣೆ ವಾಹನ, ಕವಲಂದೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯಿತು. ಇದೇ ಸಂದರ್ಭ ರಸ್ತೆಯಲ್ಲಿ ಎದುರಿಗೆ ನೇರಳೆ ಗ್ರಾಮದಿಂದ ನಂಜನಗೂಡಿಗೆ ಬರುತ್ತಿದ್ದ ಟಿ.ವಿ.ಎಸ್ ಮೊಪೆಡ್ ಮೇಲೆಯೇ ಈ ವಾಹನ ಬಿದ್ದಿದ್ದರಿಂದ ಚಿಕ್ಕಮ್ಮ–ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ನಂಜನಗೂಡು ಸಂಚಾರ ಠಾಣೆಯ ಪೊಲೀಸರು ತಿಳಿಸಿದರು.