‘ಹೆರಿಟೇಜ್ ಗಾಲ್ಫ್ ಕ್ಲಬ್ ಆರಂಭಿಸಲಿಕ್ಕಾಗಿ ಐವರು 2004ರಲ್ಲಿ ರೈತರಿಂದ 400 ಎಕರೆ ಜಮೀನನ್ನು ಕೆಐಎಡಿಬಿ ಮೂಲಕ ಪಡೆದಿದ್ದರು. ಆದರೆ ಇದೀಗ ಇಲ್ಲಿ ಯಾವೊಂದು ಚಟುವಟಿಕೆ ನಡೆದಿಲ್ಲ. 189 ಎಕರೆ ಜಮೀನನ್ನು ಕೆಐಎಡಿಬಿಗೆ 1 ಎಕರೆಗೆ ₹ 49 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಇದನ್ನು ವಿರೋಧಿಸಿ ರೈತರು 194 ದಿನಗಳಿಂದಲೂ ಅವಿರತ ಹೋರಾಟ ನಡೆಸಿದ್ದಾರೆ’ ಎಂದು ರೈತ ಮುಖಂಡ ಹೊಸಕೋಟೆ ಬಸವರಾಜು ತಿಳಿಸಿದರು.