ಮೈಸೂರು: ಅಖಿಲ ಭಾರತ ಸಾಹಿತ್ಯ ಪರಿಷದ್ನ 3ನೇ ರಾಜ್ಯ ಅಧಿವೇಶನ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಜನಾರ್ದನ ದೇವಸ್ಥಾನ ಬಳಿಯ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಜ.8, 9ರಂದು ನಡೆಯಲಿದೆ.
‘ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ ವಿಷಯದ ಕುರಿತು ನಡೆಯಲಿರುವ ಅಧಿವೇಶನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಉದ್ಘಾಟಿಸುವರು. ರಂಗಕರ್ಮಿ ದಿವಾಕರ ಹೆಗಡೆ ಸಮಾರೋಪ ಭಾಷಣ ಮಾಡುವರು’ ಎಂದು ಪರಿಷದ್ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಪರಿಷದ್ನ ಮೈಸೂರು ಜಿಲ್ಲಾ ಸಮಿತಿಯ ಕೊಶಾಧ್ಯಕ್ಷ ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ರಘುಶೆಟ್ಟಿ, ಶ್ರೀರಾಮ್ ಇದ್ದರು.