ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಮತ್ತೊಂದು ಕಾರಿಗೆ ಬೆಂಕಿ

Last Updated 11 ಜನವರಿ 2022, 8:12 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಮಂಗಳವಾರ ಮತ್ತೊಂದು ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಹೋಗಿದೆ.

ನಗರದ ಗನ್‌ಹೌಸ್‌ ವೃತ್ತದಲ್ಲಿ ಕೆ.ಆರ್.ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೇರಿದ ಹುಂಡೈ ಐ 20 ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಿಂದ ಇಳಿದ ಇವರು ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ ಅರಸು ನೇತೃತ್ವದ ತಂಡ ಬೆಂಕಿಯನ್ನು ನಂದಿಸಿತು.

ಬೆಳಿಗ್ಗೆಯಷ್ಟೇ ನಂಜನಗೂಡು ತಾಲ್ಲೂಕಿನ ದೇವನೂರು–ಬದನವಾಳು ರಸ್ತೆಯಲ್ಲಿ ಓಮ್ನಿ ಕಾರಿಗೆ ರಸ್ತೆಯಲ್ಲಿ ಒಕ್ಕಣೆಗಾಗಿ ಹಾಕಿದ್ದ ಹುರುಳಿಯ ಕಡ್ಡಿ, ಹುಲ್ಲು ಸಿಲುಕಿ ಕಾರು ಸಂಪೂರ್ಣ ಭಸ್ಮಗೊಂಡಿತ್ತು. ಸೋಮವಾರ ನಂಜನಗೂಡು ತಾಲ್ಲೂಕಿನ ದಡದಹಳ್ಳಿಯಲ್ಲಿ ಎಂಜಿನ್‌ ಬಿಸಿಯಾಗಿ ಟಿಪ್ಪರ್‌ವೊಂದು ಸಂಪೂರ್ಣ ಸುಟ್ಟು ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT