ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದ ಬಳಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಮೇಲಿನಂತೆ ಪ್ರತಿಕ್ರಿಯಿಸಿದ ಮಂಜುನಾಥ್, ‘ಈಗಾಗಲೇ ಒಮ್ಮೆ ಶಾಸಕರಾಗಿ ಹುಣಸೂರನ್ನು ಅಧೋಗತಿಗೆ ತಳ್ಳಿದವರು. ಇದೀಗ ಮತ್ತೆ ಮಂತ್ರಿಯಾಗಿ ಇನ್ಯಾವ ಸ್ಥಿತಿಗೆ ದೂಡಲಿದ್ದಾರೆ’ ಎಂದು ವಿಶ್ವನಾಥ್ ಅವರನ್ನು ಮೂದಲಿಸಿದರು.